ಧಾರವಾಡ 25 :
ಯಾವುದೇ ದಾಖಲಾತಿ ಇಲ್ಲದೇ ಸಾರಿಗೆ ಸಂಸ್ಥೆ ಬಸ್ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದ್ದ 4,97,600 ರೂ, ಗಳನ್ನು ತೇಗೂರು ಚೆಕ್ ಪೋಸ್ಟ್ನಲ್ಲಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ .
ನಿಪ್ಪಾಣಿಯಿಂದ ಭದ್ರಾವತಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಚಿಕ್ಕಮಗಳೂರಿನ ಮಶೋದ್ ಎಂಬ ವ್ಯಕ್ತಿ ಪ್ರಯಾಣಿಸುತ್ತಿದ್ದ . ಈ ಬಸ್ಸನ್ನು ತೇಗೂರು ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಲಾಯಿತು .
ಮಶೋದ್ ಎಂಬಾತನ ಬ್ಯಾಗ್ ಚೆಕ್ ಮಾಡಿದಾಗ ಅದರಲ್ಲಿ 4,97,600 ರೂ, ಹಣ ಇದ್ದದ್ದು ಕಂಡು ಬಂದಿದೆ . ಆತ ಬೆಳಗಾವಿ ಮತ್ತು ನಿಪ್ಪಾಣಿಗೆ ಟಿಂಬರ್ ಪೂರೈಕೆ ಮಾಡಿದ ಹಣವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು , ಅದಕ್ಕೆ ಯಾವುದೇ ದಾಖಲಾತಿಯನ್ನು ಆತ ಪೂರೈಸದೇ ಇರುವುದರಿಂದ ಚುನಾವಣಾಧಿಕಾರಿಗಳು ಆ ಹಣವನ್ನು ತಮ್ಮ ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.